ಸತ್ತವನ ಮನೆಯಲ್ಲಿ

ಸತ್ತವನ ಮನೆಯಲ್ಲಿ ಸಂಜೆ
ಅವರಿವರು ತಂದಿಟ್ಟ
ಬಗೆ ಬಗೆಯ ಊಟ
ಅವರಿವರು ತಂದಿಟ್ಟ
ಹಲವು ಹತ್ತು ಸಮಸ್ಯೆ.
ಸಂತಾಪಕೆ ಬಂದವರ
ಮಾತು ನಗೆ ಕೇಕೆ
ಸರಸ ಸಂಭಾಷಣೆ!
ನವ ವಿಧವೆ ಸೊಂಟದಲ್ಲಿ
ಬೀಗದ ಕೈಗೊಂಚಲು ಭದ್ರ.
ಮಗ ಮಗಳು ಸೊಸೆ ಅಳಿಯ
ಎಲ್ಲರದೂ ಒಂದೇ ಚಿಂತೆ
ಚಿತೆ ಏರಿದವನ ಅಸ್ತಿ
ಲಪಟಾಯಿಸುವ ಸಂಚು.
ಗೃಹ ಕಲಹ, ಶೀತಲ ಯುದ್ಧ
ಎಲ್ಲ ಈಗಲೇ ಆಗಬೇಕು
ಬಿಸಿ ಆರುವ ಮುನ್ನ
ತಟ್ಟಿದರೆ ತಾನೆ ಕಬ್ಬಿಣ ಮೆದು.
ಸಾಲ ಕೊಡದವರೂ ಬಂದರು ವಸೂಲಿಗೆ.
ಆಫೀಸಿನಿಂದ ಬಂತು ವಂತಿಗೆ
ಮರಣೋತ್ತರ ನಿಧಿ
ಗ್ರಾಚ್ಯುಟಿ ಜತೆಗೆ ಭವಿಷ್ಯ ನಿಧಿ.
ನಿಧಿ ಕಂಡು ಎಲ್ಲರ ಮುಖ
ಅರಳಿತು – ಮರೆಯಿತು ದುಃಖ
ಅಳುವರಾರಿಲ್ಲ ಇಲ್ಲಿ
ಆಸಯೊಂದೇ ತುಂಬಿತ್ತು,
ಎಲ್ಲರ ಕಣ್ಣುಗಳಲ್ಲಿ.
ಸತ್ತವನ ಫೋಟೋ ಬಂತು
ಹೂವಿನ ಹಾರ, ಊದುಬತ್ತಿ
ಪುರೋಹಿತರ ಮಂತ್ರ-ತಂತ್ರ
ಎಲ್ಲ ಸಾಂಗೋಪಾಂಗ
ಸತ್ತವ ಮೇಲಿಂದ ನೋಡಿ ನೊಂದ
ಯಾರಿಗೂ ಬೇಡವಾದ ನಾನು
ಈ ಸುಖಕ್ಕೆ ಸಾಯಬೇಕಿತ್ತೇನು?
*****
೩೧-೦೫-೧೯೯೩

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಕುಂದರಾಜ್: ‘ಮುಳ್ಳಿನ ಕಿರೀಟ’
Next post ಕವಿ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys